ಪಂಜ ಜೇಸಿ ಸಪ್ತಾಹ ಸಮಾರೋಪ ಸಮಾರಂಭ: ನಾಗಮಣಿ ಕೆದಿಲ ಅವರಿಗೆ ಕಮಲಪತ್ರ ಪುರಸ್ಕಾರ

ಸುಳ್ಯ:ಜೇಸಿಐ ಪಂಜ ಪಂಚಶ್ರೀ ಇದರ ಜೇಸಿ ಸಪ್ತಾಹ-೨೦೨೫ ಸಮಾರೋಪ ಸಮಾರಂಭ ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ಸಭಾಭವನದಲ್ಲಿ ಶನಿವಾರ ನಡೆಯಿತು.
ಘಟಕದ ಅಧ್ಯಕ್ಷ ವಾಚಣ್ಣ ಕೆರೆಮೂಲೆ ಅಧ್ಯಕ್ಷತೆ ವಹಿಸಿದ್ದರು. ಜೇಸಿ ಪೂರ್ವಾಧ್ಯಕ್ಷ ನಾಗಮಣಿ ಕೆದಿಲ ಅವರಿಗೆ ಕಮಲಪತ್ರ ಪುರಸ್ಕಾರ ನೀಡಲಾಯಿತು.
ಜೇಸಿಐ ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷ ಪುರಂದರ ರೈ ಕಮಲ ಪತ್ರ ಪುರಸ್ಕಾರ ವಿತರಣೆ ಮಾಡಿದರು. ಪಂಜ ಪೂರ್ವ ವಲಯಾಧಿಕಾರಿ ರಾಕೇಶ್ ರೈ ಕೆಡೆಂಜಿ, ವಲಯಾಧಿಕಾರಿ ಲೋಕೇಶ್ ಆಕ್ರಿಕಟ್ಟೆ, ಜೇಸಿಐ ಪಂಜ ಪಂಚಶ್ರೀ ಸ್ಥಾಪಕಾಧ್ಯಕ್ಷ ದೇವಿಪ್ರಸಾದ್ ಜಾಕೆ, ನಿಕಟಪೂರ್ವಾಧ್ಯಕ್ಷ ಜೀವನ್ ಮಲ್ಕಜೆ, ಕಾರ್ಯದರ್ಶಿ ಅಶ್ವಥ್ ಬಾಬ್ಲುಬೆಟ್ಟು, ಸಪ್ತಾಹ ನಿರ್ದೇಶಕ ದೇವಿ ಪ್ರಸಾದ್ ಚಿಕ್ಮುಳಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪಾಂಡಿಗದ್ದೆ ಸ.ಕಿ.ಪ್ರಾ. ಶಾಲೆಯ ಮುಖ್ಯ ಶಿಕ್ಷಕ ಯಶೋಧರ ಕಳಂಜ ಮತ್ತು ಉದಯೋನ್ಮುಖ ಗಾಯಕಿ ಕು.ಸುಮಾ ಕೋಟೆ ಅವರನ್ನು ಸನ್ಮಾನಿಸಲಾಯಿತು. ಪರಿಸರದ ಪ್ರತಿಭಾನ್ವಿತ ಬಡ ವಿದ್ಯಾರ್ಥಿಗಳಿಗೆ ಪಂಚಶ್ರೀ ವಿದ್ಯಾನಿಧಿ, ವಿದ್ಯಾರ್ಥಿ ವೇತನ ವಿತರಣೆ ಮಾಡಲಾಯಿತು. ಘಟಕದ ಪೂರ್ವಾಧ್ಯಕ್ಷ ಶಿವಪ್ರಸಾದ್ ಹಾಲೆಮಜಲು ಕಾರ್‍ಯಕ್ರಮ ನಿರೂಪಿಸಿದರು.
ವಾಚಣ್ಣ ಕೆರೆಮೂಲೆ ಸ್ವಾಗತಿಸಿದರು. ಕಾರ್ತಿಕ್ ಐ ಬಿ ಜೇಸಿ ವಾಣಿ ವಾಚಿಸಿದರು. ಅಶೋಕ್ ಕುಮಾರ್ ನಿಡುಬೆ, ಗಗನ್ ಕಿನ್ನಿಕುಮೇರಿ, ಜೀವನ್ ಶೆಟ್ಟಿಗೆದ್ದೆ , ಕೌಶಿಕ್ ಕುಳ ಸನ್ಮಾನಿತರ ಮತ್ತು ಅತಿಥಿಗಳ ಪರಿಚಾಯಿಸಿದರು. ಅಶ್ವಥ್ ಬಾಬ್ಲುಬೆಟ್ಟು ವಂದಿಸಿದರು. ಬಳಿಕ ಗಾಯಕಿ ಸುಮಾ ಕೋಟೆ ಇವರಿಂದ ಗಾನ ಸುಧೆ, ಸುಬ್ರಹ್ಮಣ್ಯ ಕೆ.ಎಸ್.ಎಸ್. ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಸಂಭ್ರಮ ನಡೆಯಿತು.