
ನವದೆಹಲಿ, ನ. ೨೩- ಬೇಶದ ೫೩ನೇ ಮುಖ್ಯ ನ್ಯಾಯಾಧೀಶರಾಗಿ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ಸೋಮವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಅಕ್ಟೋಬರ್ ೩೦ರಂದು ಅವರ ನೇಮಕಾತಿಯನ್ನು ಘೋಷಿಸಲಾಗಿತ್ತು. ಸುಮಾರು ೧೫ ತಿಂಗಳ ಕಾಲ ಈ ಹುದ್ದೆಯಲ್ಲಿ ಅವರು ಕಾರ್ಯನಿರ್ವಹಿಕುವುದರೊಂದಿಗೆ, ಫೆಬ್ರವರಿ ೯, ೨೦೨೭ರಂದು ವಯಸ್ಸಿನ ನಿವೃತ್ತಿಯಾಗಲಿದ್ದಾರೆ.
ನ್ಯಾಯಮೂರ್ತಿ ಸೂರ್ಯಕಾಂತ್ ಅವರು ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದಿಗೆ ಸಂಬಂಧಿಸಿದ ಅನುಚ್ಛೇದ ೩೭೦ ರದ್ದತಿ, ಪೆಗಾಸಸ್ ಖುಷಕಿ ತಂತ್ರಾಂಶ ವಿವಾದ ಮತ್ತು ಬಿಹಾರ ಚುನಾವಣಾ ಮತದಾರರ ಪಟ್ಟಿ ಪರಿಷ್ಕರಣೆ ಸೇರಿದಂತೆ ಹಲವಾರು ರಾಷ್ಟ್ರೀಯ ಮಹತ್ವದ ತೀರ್ಪುಗಳು ಮತ್ತು ಆದೇಶಗಳಲ್ಲಿ ಭಾಗಿಯಾಗಿದ್ದಾರೆ.
ಹರಿಯಾಣದ ಹಿಸಾರ್ ಜಿಲ್ಲೆಯ ಸಾಮಾನ್ಯ ಕುಟುಂಬದಲ್ಲಿ ಫೆಬ್ರವರಿ ೧೦, ೧೯೬೨ರಂದು ಜನಿಸಿದ ಸೂರ್ಯಕಾಂತ್ ಅವರು, ಒಬ್ಬ ಸಣ್ಣ ಪಟ್ಟಣದ ವಕೀಲರಿಂದ ದೇಶದ ಅತ್ಯುನ್ನತ ನ್ಯಾಯಾಂಗ ಹುದ್ದೆಗೆ ಏರಿದ ವ್ಯಕ್ತಿತ್ವಯಾಗಿದ್ದಾರೆ. ಕುರುಕ್ಷೇತ್ರ ವಿಶ್ವವಿದ್ಯಾಲಯದಿಂದ ೨೦೧೧ರಲ್ಲಿ ಕಾನೂನು ಸ್ನಾತಕೋತ್ತರ ಪದವಿಯಲ್ಲಿ ’ಫಸ್ಟ್ ಕ್ಲಾಸ್ ಫಸ್ಟ್’ ಸಾಧಿಸಿದ ಕೀರ್ತಿ ಅವರದ್ದಾಗಿದೆ.
ರಾಜ್ಯಪಾಲ ಮತ್ತು ರಾಷ್ಟ್ರಪತಿಯ ಅಧಿಕಾರಗಳಿಗೆ ಸಂಬಂಧಿಸಿದ ರಾಷ್ಟ್ರಪತಿ ಉಲ್ಲೇಖದ ವಿಚಾರಣೆಯಲ್ಲಿ ಅವರು ಸದಸ್ಯರಾಗಿದ್ದರು. ದೇಶದ್ವೇಷ ಕಾನೂನನ್ನು ತಾತ್ಕಾಲಿಕವಾಗಿ ನಿಲ್ಲಿಸುವಂತೆ ಆದೇಶಿಸಿದ ನ್ಯಾಯಪೀಠದಲ್ಲೂ ಅವರು ಇದ್ದರು. ಮಹಿಳಾ ಸರ್ಪಂಚ್ ಅವರನ್ನು ಪದವಿಗೆ ಪುನರ್ಸ್ಥಾಪಿಸಿದ್ದು, ಬಾರ್ ಸಂಘಗಳಲ್ಲಿ ಮಹಿಳೆಯರಿಗೆ ಒಂದು ಭಾಗ ಸೀಟುಗಳನ್ನು ಮೀಸಲಿಡುವಂತೆ ನಿರ್ದೇಶಿಸಿದ್ದು, ಒನ್ ರ್ಯಾಂಕ್-ಒನ್ ಪೆನ್ನನ್ ಯೋಜನೆಯನ್ನು ಸಂವಿಧಾ ನಬದ್ಧವೆಂದು ಸಮರ್ಥಿಸಿದ್ದು ಮತ್ತು ಪೆಗಾಸಸ್ ಪ್ರಕರಣದಲ್ಲಿ ರಾಷ್ಟ್ರೀಯ ಭದ್ರತೆಯ ಹೆಸರಿನಲ್ಲಿ ರಾಜ್ಯವು ಉಚಿತ ದಾಟಿಗೆ ಪಡೆಯಲಾಗದು ಎಂದು ಹೇಳಿದ್ದು ಅವರ ಇತರ ಗಮನಾರ್ಹ ಕೊಡುಗೆಗಳಾಗಿವೆ.
ಅವರ ಅಧಿಕಾರಾವಧಿಯಲ್ಲಿ ನ್ಯಾಯಾಂಗದಲ್ಲಿ ಬಕಾಯಿ ಮೊಕದ್ದಮೆಗಳ ನಿರ್ಮೂಲನೆ ಮತ್ತು ನ್ಯಾಯದ ವೇಗವಾದ ವಿತರಣೆಗೆ ಅವರು ಪ್ರಾಮುಖ್ಯತೆ ನೀಡುವುದಾಗಿ ನಿರೀಕ್ಷಿಸಲಾಗಿದೆ.



























