
ಸುಳ್ಯ:ಸುಳ್ಯ ನಗರ ವ್ಯಾಪ್ತಿಯ ಜಯನಗರ ಮಿಲಿಟರಿ ಗ್ರೌಂಡ್ನ ಅಡಿಸ್ಥಳದ ಮೂಲಭೂತ ಸಮಸ್ಯೆಯ ಕುರಿತು ಹಕ್ಕೋತ್ತಾಯ ಸಮಿತಿಯಿಂದ ಹೋರಾಟ ನಡೆಯುತ್ತಿದ್ದು ಶುಕ್ರವಾರ ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದರು.
ಪ್ರಕರಣದ ಬಗ್ಗೆ ಜಿಲ್ಲಾ ನ್ಯಾಯಾಲಯದಲ್ಲಿ ಪ್ರಸ್ತುತ ವರದಿಯ ವಿಚಾರಣೆ ನಡೆಯುತ್ತಿದ್ದು ಜಿಲ್ಲಾಧಿಕಾರಿ ಅವರ ಆದೇಶದಂತೆ ಸುಳ್ಯ ತಹಸೀಲ್ದಾರ್ ಮಂಜುಳ ,ಉಪ ತಹಸೀಲ್ದಾರ್ ಚಂದ್ರಶೇಖರ, ಗ್ರಾಮ ಲೆಕ್ಕಾಧಿಕಾರಿ ತಿಪ್ಪೇಶ್, ಕಂದಾಯ ನಿರೀಕ್ಷಕ ಅವಿನ್ ರಂಗತ್ತಮಲೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಸ್ಥಳೀಯರಾದ ಹಕ್ಕೋತ್ತಾಯ ಸಮಿತಿ ಸಂಚಾಲಕ ಜಿ.ಜಗನ್ನಾಥ ಜಯನಗರ, ಜಯನಗರ ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ರಂಜಿತ್ ಕುಮಾರ್ ಹಾಗೂ ಹಕ್ಕೋತ್ತಾಯ ಸಮಿತಿ ಸದಸ್ಯರಾದ ರಾಕೇಶ್ ಕುಂಟಿಕಾನ, ಮತ್ತಿತರರು ಉಪಸ್ಥಿತರಿದ್ದರು.



























