
ವಾಷಿಂಗ್ಟನ್, ಜೂ, 2- ವಿವಿಧ ಕೃಷಿ ಮತ್ತು ಕೈಗಾರಿಕಾ ಉಪಕರಣಗಳ ಮೇಲಿನ ಅಮದು ಸುಂಕಗಳನ್ನು ಶೇಕಡಾ 25 ರಿಂದ ಶೇಕಡಾ 15ಕ್ಕೆ ಇಳಿಸಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕೃತ ಘೋಷಣೆ ಮಾಡಿದ್ದಾರೆ. ಈ ಆದೇಶ ಮುಂದಿನ ವರ್ಷಾಂತ್ಯದವರೆಗೆ ಸುಂಕ ಚಾಲ್ತಿಯಲ್ಲಿರಲಿದೆ ಎಂದು ಹೇಳಿದ್ದಾರೆ.
ವಿವಿಧ ದೇಶಗಳಿಂದ ಅಮದು ಮಾಡಿಕೊಳ್ಳುವ ಉತ್ಪನ್ನಗಳ ಮೇಲೆ ಸುಂಕ ಹೆಚ್ಚಳ ಮಾಡುತ್ತಿರುವ ನಡುವೆ ಕೃಷಿ ಮತ್ತು ಕೈಗಾರಿಕೆ ಉಪಕರಣಗಳ ಮೇಲಿನ ಸುಂಕವನ್ನು ಶೇಕಡಾ 10 ರಷ್ಟು ಕಡಿತ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಬದಲಾವಣೆಗಳ ಅಡಿಯಲ್ಲಿ, ಕಂಬೈನ್ಸ್, ಹಾರ್ವೆಸ್ಟರ್ಗಳು ಮತ್ತು ಇತರ ಕೃಷಿ ಉಪಕರಣಗಳಂತಹ ಕೃಷಿ ಯಂತ್ರೋಪಕರಣಗಳ ಮೇಲಿನ ಸುಂಕಗಳು ಪ್ರಸ್ತುತ ಶೇಡಕಾ 25 ರಿಂದ 15 ಕ್ಕೆ ಇಳಿಯಲಿದೆ. ರಿಪಬ್ಲಿಕನ್ ಆಡಳಿತದಲ್ಲಿ ಶೇ. 10 ರಷ್ಟು ತೆರಿಗೆ ಕಡಿತ ಅಮೆರಿಕದ ಕೃಷಿ ವಲಯದಲ್ಲಿ ಹೂಡಿಕೆ ಬೆಂಬಲಿಸುವಾಗ ಉತ್ಪಾದಕರಿಗೆ ವೆಚ್ಚ ಕಡಿಮೆ ಮಾಡುವ ಉದ್ದೇಶವನ್ನು ಹೊಂದಿದೆ ಎಂದು ಹೇಳೀದ್ದಾರೆ.
ಈ ಘೋಷಣೆಯಿಂದ ಸುಂಕ ಶೇ. 15ಕ್ಕೆ ಇಳಿಯಲಿದೆ. ಸುಂಕ ದರಕ್ಕೆ ಅರ್ಹವಾದ ಕೈಗಾರಿಕಾ ಉಪಕರಣಗಳ ವ್ಯಾಪ್ತಿ ವಿಸ್ತರಿಸುತ್ತದೆ. ಬುಲ್ಡೋಜರ್ಗಳು, ಫೆÇರ್ಕ್ಲಿಫ್ಟ್ಗಳು ಮತ್ತು ಅಮೇರಿಕಾ ವ್ಯಾಪಾರ ಒಪ್ಪಂದಗಳಿಂದ ಒಳಗೊಳ್ಳಲ್ಪಟ್ಟ ದೇಶಗಳಿಂದ ಆಮದು ಮಾಡಿಕೊಳ್ಳುವ ಅಂತಹುದೇ ಉಪಕರಣಗಳು ಸೇರಿದಂತೆ ಮೊಬೈಲ್ ಕೈಗಾರಿಕಾ ಯಂತ್ರೋಪಕರಣಗಳು ಈಗ ಕಡಿಮೆ ಸುಂಕ ಪಡೆಯಲಿವೆ.
ದೇಶೀಯ ಲೋಹಗಳ ಉತ್ಪಾದನೆ ಬಲಪಡಿಸಲು ವಿನ್ಯಾಸಗೊಳಿಸುವ ನಿಟ್ಟಿನಲ್ಲಿ ವಿದೇಶಿ ತಯಾರಕರು ತಮ್ಮ ಆಮದು ಮಾಡಿಕೊಂಡ ಬಂಡವಾಳ ಉಪಕರಣಗಳ ಕನಿಷ್ಠ ಶೇಕಡ 85 ರಷ್ಟು ಅಮೇರಿಕಾದ ಮೂಲದ ಉಕ್ಕು ಅಥವಾ ಅಲ್ಯೂಮಿನಿಯಂ ಅನ್ನು ತೂಕದಿಂದ ಹೊಂದಿದ್ದರೆ ಇನ್ನೂ ಕಡಿಮೆ ಶೇಕಡಾ 10ರಷ್ಟು ಸುಂಕ ದರವನ್ನು ಪಡೆಯಲು ಸಾಧ್ಯವಾಗುತ್ತದೆ ಎಂದಿದ್ದಾರೆ.
ಅರ್ಹತೆ ಪಡೆಯಲು, ಉಕ್ಕನ್ನು ಕರಗಿಸಿ ಅಮೆರಿಕದಲ್ಲಿ ಸುರಿಯಬೇಕು, ಆದರೆ ಅಲ್ಯೂಮಿನಿಯಂ ಅನ್ನು ಕರಗಿಸಿ ದೇಶೀಯವಾಗಿ ಎರಕಹೊಯ್ದ ಮಾಡಬೇಕು ಎನ್ನವ ಷರತ್ತನ್ನು ಹಾಕಿದ್ದಾರೆ.
ಡಿಸೆಂಬರ್ 2027 ರವರೆಗೆ ಜಾರಿಯಲ್ಲಿರುವ ತಾತ್ಕಾಲಿಕ ಕ್ರಮಗಳು ಅಲ್ಪಾವಧಿಯ ಹೂಡಿಕೆ ವೇಗಗೊಳಿಸಲು ಮತ್ತು ಅಮೆರಿಕದ ಕೈಗಾರಿಕಾ ನೆಲೆ ಪುನರ್ನಿರ್ಮಿಸಲು ಸಹಾಯ ಮಾಡುವ ಉದ್ದೇಶ ಹೊಂದಿವೆ ಎಂದು ತಿಳಿಸಿದ್ದಾರೆ.
ಅಸ್ತಿತ್ವದಲ್ಲಿರುವ ಲೋಹಗಳಿಗೆ ಸಂಬಂಧಿಸಿದ ವ್ಯಾಪಾರ ಕ್ರಮ ಮಾರ್ಪಡಿಸುವ ಹೊಸ ಅಧ್ಯಕ್ಷೀಯ ಘೋಷಣೆಯ ಮೂಲಕ ಈ ಕ್ರಮ ಬಂದಿದೆ, ಷಿ, ವಸತಿ ಮತ್ತು ಉತ್ಪಾದನೆ ಸೇರಿದಂತೆ ಪ್ರಮುಖ ವಲಯಗಳನ್ನು ಉತ್ತೇಜಿಸುವಾಗ ರಾಷ್ಟ್ರೀಯ ಭದ್ರತಾ ಕಾಳಜಿಗಳನ್ನು ಪರಿಹರಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿದ್ದಾರೆ.
ಆಮದು ಮಾಡಿಕೊಂಡ ಅಲ್ಯೂಮಿನಿಯಂ, ಉಕ್ಕು ಮತ್ತು ತಾಮ್ರದ ಮೇಲಿನ ಸುಂಕಗಳನ್ನು ಅಮೇರಿಕಾದ ರಾಷ್ಟ್ರೀಯ ಭದ್ರತೆ, ಪ್ರಮುಖ ಕೈಗಾರಿಕೆಗಳ ಆರ್ಥಿಕ ಸ್ಥಿತಿಸ್ಥಾಪಕತ್ವ ಮತ್ತು ಕಡಿಮೆ ಬೆಲೆಯ ವಿದೇಶಿ ಆಮದುಗಳ ಬೆದರಿಕೆಯಿಂದ ಅಮೇರಿಕನ್ ಕುಟುಂಬಗಳು, ಸಮುದಾಯಗಳು ಮತ್ತು ವ್ಯವಹಾರಗಳ ಆರ್ಥಿಕ ಸ್ಥಿತಿಯನ್ನು ರಕ್ಷಿಸಲು ಬಳಸಿದ್ದಾರೆ” ಎಂದು ಶ್ವೇತಭವನ ತಿಳಿಸಿದೆ.
























