
ಸಂಜೆವಾಣಿ ವಾರ್ತೆ
ಬಳ್ಳಾರಿ, ಫೆ,10- ರಾಷ್ಟ್ರೀಯ ಸ್ವಯಂಸೇವಕ ಸಂಘ ಶತಮಾನೋತ್ಸವದ ಅಂಗವಾಗಿ ಬಳ್ಳಾರಿಯ ಹಿಂದು ಸಮ್ಮೇಳನ ಸಮಿತಿ ಸತ್ಯನಾರಾಯಣ ಪೇಟೆ ಉಪ ನಗರ ವತಿಯಿಂದ ಬಳ್ಳಾರಿ ನಗರದ ಶ್ರೀರಾಮಪರ ಕಾಲೋನಿಯ ಶ್ರೀರಾಮ ಮಂದಿರದಿಂದ ಭಾರತಮಾತೆಯ ಭಾವಚಿತ್ರ ಮತ್ತು ಚಿಕ್ಕಮಕ್ಕಳಿಂದ ಮಹಾಪುರುಷ ವೇಶಧರಿಸಿ ಶೋಭಯಾತ್ರೆಯಲ್ಲಿ ಬಾಗವಹಿಸಿದ್ದು ವಿಶೇಷವಾಗಿತ್ತು ಶ್ರೀರಾಂಪುರ ಕಲೋನಿಯ ಸುತ್ತಮುತ್ತಲಿನ ರಸ್ತೆಯಲ್ಲಿಸಾಗಿಬಂದು ಪವನ್ ಹೋಟೆಲ್ ಹಿಂಬಾಗದ ಮೈದಾನದಲ್ಲಿ ನಡೆಯುವ ವೇದಿಕೆಯ ಕಾರ್ಯಕ್ರಮದ ಸ್ಥಳಕ್ಕೆ ಸೇರಿಕೊಂಡಿತ್ತು ನಂತರ ಸಭಾಕಾರ್ಯಕ್ರಮ ನಡೆಯಿತು
ಭಾರತಮಾತೆ ಗೆ ಪುಷ್ಪಾರ್ಚನೆ ಮತ್ತು ತುಳಸಿಗಿಡಕ್ಕೆ ನೀರು ಹಾಕುವ ಮೂಲಕ ಕಾರ್ಯಕ್ರಮದ ಉದ್ಘಾಟಾನೆಮಾಡಲಾಯಿತು ವೇದಿಕೆಯ ಮೇಲೆ ಉಪಸ್ಥಿತರಿದ್ದ ಗಣ್ಯರ ಸ್ವಾಗತ ಮತ್ತು ಪರಿಚಯವನ್ನು ಶ್ರೀಯುತ ವಿಜಯೇಂದ್ರರವರು ಮಾಡಿದರು ಸಂಘದ ಪಂಚ ಪರಿವರ್ತನೆಗಳ ಬಗ್ಗೆ ಶ್ರೀಯುತ ಶ್ರೀನಿವಾಸ ರವರು ತಿಳಿಸಿಕೊಟ್ಪರು ಮುಖ್ಯ ವಕ್ತಾರರಾಗಿ ತೆಲಂಗಾಣ ರಾಜ್ಯದ ನಾರಾಯಣಪೇಟೆ ಜಿಲ್ಲೆಯ ಬೀಜವರ ಗ್ರಾಮದ
ಅಂಬಾತ್ರಯ ಕ್ಷೇತ್ರ ( ಶಕ್ತಿ ಪೀಠ ) ದ ಶ್ರೀ ಶ್ರೀ ಶ್ರೀ ಆದಿತ್ಯ ಪರಾಶ್ರೀ ಸ್ವಾಮಿಗಳು ದಿವ್ಯಸಾನಿಧ್ಯವಹಿಸಿ ಮಾತನಾಡುತ್ತಾ ಹಿಂದುಸಮಾಜವು ಪ್ರಕೃತಿದೇವತೆಗಳನ್ನು ಆರಾದಿಸುತ್ತೇವೆ ಯಾರನ್ನು ಧ್ವೇಶಿಸುವುದಿಲ್ಲ ದೇಶದಲ್ಲಿ ಚರ್ಚ್ ಮತ್ತು ಮಸೀದಿಗಳನ್ನು ಕಟ್ಟಿಕೊಳ್ಳಲಿ ಆದರೆ ನಮ್ಮ ದೇವಸ್ಥಾನದ ತಂಟಗೆಬಂದರೆ ನಾವು ಸುಮ್ಮನೆ ಬಿಡುವುದಿಲ್ಲ
ಮಹಾರಾಷ್ಟ್ರದ ಮುಂಬಾ ನಗರ ಪಾಲಿಕೆಯ ಎ ಐಯಂಐಯಂನಿಂದ ಗೆದ್ದಿರುವ ಸದಸ್ಯೆಯೊಬ್ಬಳು ಹೇಳುತ್ತಾಳೆ ಇಡಿ ಕ್ಷೇತ್ರವನ್ನು ಇಸ್ಲಾಂಮಿಕರಣ ಮಾಡುತ್ತೇನೆ
ಮತ್ತು ಅವರ ಪಕ್ಷದ ಮಹಾನಾಯಕ ಹೇಳುತ್ತಾನೆ ಮುಂದೆ ಒಂದು ದಿನ ಹಿಜಾಬು ಹಾಕಿರುವ ಮಹಿಳೆಯೊಬ್ಬಳು ಈ ದೇಶದ ಪ್ರಧಾನಮಂತ್ರಿಯಗುತ್ತಾಳೆಅಂತ ಹೇಳುತ್ತಾನೆ ಆದರೆ ಒಂದು ಕಾಲದಲ್ಲಿ ನಮ್ಮದೆ ಭಾಗವಗಿದ್ದ ಬಾಂಗ್ಲಾದೇಶದಲ್ಲಿ ಅವರದೆ ಸಮಾಜದ ಮಹಿಳೆ ಪ್ರಧಾನಮಂತ್ರಿ ಯಾಗಿದ್ದರು ಅವರನ್ನು ಯಾಕೆ ಅಲಿಂದ ಓಡಿಸಲಾಯಿತು ಪಕ್ಕದ ಪಾಕಿಸ್ತಾನದಲ್ಲಿ ಪುರುಷ ಪ್ರಧಾನಮಂತ್ರಿಯಾಗಿದ್ದ ಇಮ್ರಾನ್ ಖಾನ್ ಪರಿಸ್ಥಿತಿಯೇನಾಗಿದೆ ಎಂದು ಖಾರವಾಗಿ ತಿಳಿಸಿದರು ಒಂದು ವೇಳೆ ಹಿಂದುಗಳೆಲ್ಲರು ದೇಶ ಬಿಡುವ ಪರಿಸ್ಥಿತಿ ಬಂದರೆ ನೀವು ಏನುಮಾಡುರಿ ಅಂತ ಪ್ರಶ್ನಿಸಿದರು ಈ ದೇಶದಲ್ಲಿ ಸಾದು ಸಂತರು ಇರುವವರೆಗೆ ಅಂತಹ ಪರಿಸ್ಥಿತಿ ಬರುವದಿಲ್ಲ.
ನಾವು ಛತ್ರಪತಿ ಶಿವಾಜಿ ಮಹಾರಾಜರು ಮತ್ತು ಝಾನ್ಸೀರಾಣಿ ಲಕ್ಷ್ಮೀಬಾಯಿ ಅವಅವಗೆ ಅಧ್ಯಯನ ಮಾಡಬೇಕು ವಿಶ್ವ ಕಣ್ಣುಬಿಡುವ ಮುಂಚೆ ಭಾರತದಲ್ಲಿ ಋಷಿಮುನಿಗಳು ನಮಗೆ ಯಲ್ಲವನ್ನು ಕೊಟ್ಟಿದ್ದರು ಹಿಂದು ಸಮಾಜದಲ್ಲಿ ನಾವೆ ಸೃಷ್ಟಿ ಮಾಡಿಕೊಂಡಿರುವ ಜಾತಿ ಪದ್ದತಿಗಳು ತೊಲಗಬೇಕು ಮತ್ತು ನಾವೆಲ್ಲ ಒಂದಾದರೆ ಮಾತ್ರ ಸನಾತನ ಧರ್ಮ ಮತ್ತು ಈ ದೇಶ ಎರಡು ಉಳಿಯುತ್ತವೆ ಎಂದು ಹೇಳಿದರು ಕೊನೆಯಲ್ಲಿ ಶ್ರೀಯುತ ರಾಜಸಿಂಹ ವಂದನಾರ್ಪಣೆ ಮಾಡಿದರು ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.



























