
ಸಂಜೆವಾಣಿ ವಾರ್ತೆ
ಕೆ.ಆರ್.ನಗರ, ಮಾ.01:– ಆಕಸ್ಮಿಕವಾಗಿ ಬಿದ್ದ ಬೆಂಕಿಗೆ ಭತ್ತದ ಹುಲ್ಲಿನ ಮತ್ತು ರಾಗಿ ಹುಲ್ಲಿನ ಮೇದೆ ಸಂಪೂರ್ಣವಾಗಿ ಸುಟ್ಟು ಹೋಗಿರುವ ಘಟನೆ ಸಾಲಿಗ್ರಾಮ ತಾಲೂಕಿನ ಬೆಣಗನಹಳ್ಳಿ ಗ್ರಾಮದಲ್ಲಿ ನಡೆದಿದೆ
ಗ್ರಾಮದ ಕಮಲಮ್ಮ ಕುಮಾರ್ ಎಂಬುವರಿಗೆ ಸೇರಿದ ಹುಲ್ಲಿನ ಮೇದೆ ಸಂಪೂರ್ಣವಾಗಿ ಸುಟ್ಟು ಹೋಗಿದ್ದು ಇದರಿಂದ 2 ಲಕ್ಷ ರೂ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
ಹುಲ್ಲಿನ ಮೇದೆಗೆ ಬೆಂಕಿ ಬಿದ್ದ ತಕ್ಷಣವೇ ಗ್ರಾಮಸ್ಥರು ಮತ್ತು ಅಗ್ನಿ ಶಾಮಕ ದಳ ಬೆಂಕಿ ಅರಿಸುವ ಪ್ರಯತ್ನ ಮಾಡಿದರು ಕೂಡ ಯಾವುದೇ ಪ್ರಯೋಜನವಾಗಿಲ್ಲ
ಪರಿಹಾರ ನೀಡಿ: ಬೆಂಕಿ ಆಕಸ್ಮಿಕಕ್ಕೆ ಭತ್ತದ ಹುಲ್ಲಿನ ಮೇದೆ ಮತ್ತು ರಾಗಿ ಹುಲ್ಲಿನ ಮೇದೆ ಸುಟ್ಟು ಕರಕಲಾಗಿದ್ದು
ಕಮಲಮ್ಮ ಕುಮಾರ್ ಅವರಿಗೆ ಅಪಾರ ನಷ್ಟವಾಗಿದ್ದು ಇವರಿಗೆ ತಾಲೂಕು ಅಡಳಿತ ಪರಿಹಾರ ನೀಡುವಂತೆ ಗ್ರಾಮಸ್ಥರು ಆಗ್ರಹಿಸಿದರು.






























